ಡಾ. ಶ್ರೀಧರ ಎಚ್. ಜಿ ಪರಿಚಯ

ಡಾ. ಶ್ರೀಧರ ಎಚ್. ಜಿ. ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಬರುವ ಮುಂಡಿಗೆಹಳ್ಳ ಎಂಬ ಊರಿನವರು. ಲಾಲ್ ಬಹದ್ದೂರ್ ಶಾಸ್ತಿç ಕಾಲೇಜಿನಿಂದ ಬಿ.ಎ. ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು ಪ್ರಥಮ ರ‍್ಯಾಂಕ್ ಮತ್ತು ಚಿನ್ನದ ಪದಕದೊಂದಿಗೆ ೧೯೮೬ರಲ್ಲಿ ಪಡೆದುಕೊಂಡರು. ಅದೇ ವರ್ಷ (೧೯೮೬) ಯುಜಿಸಿ ನಡೆಸುವ ಜೂನಿಯರ್ ರಿಸರ್ಚ್ ಫೆಲೋಷಿಪ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಡಾ. ಟಿ.ವಿ. ವೆಂಕಟಾಚಲ ಶಾಸ್ತಿçà ಇವರ ಮಾರ್ಗದರ್ಶನದಲ್ಲಿ “ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ” (ಕ್ರಿ.ಶ. ೪೫೦ರಿಂದ ೧೩೫೦) ಎಂಬ …

Read more

ಡಾ. ರೋಹಿಣಾಕ್ಷ ಶಿರ್ಲಾಲು ಪರಿಚಯ

ಡಾ.ರೋಹಿಣಾಕ್ಷ ಶಿರ್ಲಾಲು ಪರಿಚಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿ ಇಲ್ಲಿ ಜಾನಪದ ಶಾಸ್ತ್ರ ಮತ್ತು ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ರೋಹಿಣಾಕ್ಷ ಶಿರ್ಲಾಲು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಶಿರ್ಲಾಲು ಗ್ರಾಮದವರು. ಮಂಗಳೂರು ವಿಶ್ವವಿದ್ಯಾಲಯದಿಂದ ಎಂ ಎ ಪದವಿಯನ್ನು ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪದವಿಯನ್ನು ಪಡೆದಿದ್ದಾರೆ. ಡಾ.ರೋಹಿಣಾಕ್ಷ ಶಿರ್ಲಾಲುರವರು ಲೇಖಕರಾಗಿ ನಾಡಿನ ಬೇರೆ ಬೇರೆ ಪತ್ರಿಕೆಗಳಲ್ಲಿ ವೈಚಾರಿಕ ಬರಹಗಳನ್ನು ಪ್ರಕಟಿಸಿದ್ದಾರೆ. ಡಾ.ರೋಹಿಣಾಕ್ಷ ಶಿರ್ಲಾಲು ರವರ ಪ್ರಕಟವಾದ ಕೃತಿಗಳು ‘ಸಾಹಿತ್ಯ ವಿಚಾರ’,’ಕನ್ನಡವೂ …

Read more

ಪುತ್ತೂರು ಉಮೇಶ್ ನಾಯಕ್ ಪರಿಚಯ 

ಪುತ್ತೂರಿನ ಯುವ ಸಾಹಿತಿ, ಗ್ರಾಮ ಸಾಹಿತ್ಯದ ರೂವಾರಿ, ಜಾದೂಗಾರ ಪುತ್ತೂರು ಉಮೇಶ್ ನಾಯಕ್ ರವರು ಸಾಹಿತ್ಯ ಸೇವೆ, ಸಮಾಜ ಸೇವೆ, ಸಂಘ ಸಂಸ್ಥೆಗಳು, ಹೀಗೆ ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳುತ್ತಿರುವ ಒಬ್ಬ ಚತುರ ಸಂಘಟನಾಕಾರನೂ ಹೌದು.  ಆಗಷ್ಟ್ 31, 1973 ರಂದು ಪುತ್ತೂರಿನ ಶ್ರೀ ಜಗನ್ನಾಥ ನಾಯಕ್ ಮತ್ತು ಶ್ರೀಮತಿ ಜಯ ನಾಯಕ್ ದಂಪತಿಗಳ ಪುತ್ರನಾಗಿ ಜನಿಸಿದ ಉಮೇಶ್ ನಾಯಕ್ ಅವರು ಹುಟ್ಟಿ ಬೆಳೆದದ್ದು ಪುತ್ತೂರಿನ ದರ್ಬೆ ಎಂಬಲ್ಲಿ.   ಶಾಲಾ ದಿನಗಳಿಂದಲೇ ಕಲೆ ಸಾಹಿತ್ಯ ಸಮಾಜ ಸೇವೆ …

Read more

ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಪರಿಚಯ

ಪಾಲ್ತಾಡಿ ರಾಮಕೃಷ್ಣ ಆಚಾರ್ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಇವರು ತುಳುನಾಡಿನ ಓರ್ವ ಹಿರಿಯ ಸಾಹಿತಿ, ಹಿರಿಯ ಜಾನಪದ ವಿದ್ವಾಂಸರೂ ಹೌದು. ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಪಾಲ್ತಾಡಿ ರಾಮಕೃಷ್ಣ ಆಚಾರ್ ರವರು ಗುರುತಿಸಿಕೊಂಡವರು. ವಿಶೇಷವಾಗಿ ಕಾವ್ಯ, ನಾಟಕ, ಸಣ್ಣಕತೆ, ಸಂಶೋಧನೆ, ವಿಮರ್ಶೆ ಮತ್ತು ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಿದವರು.  ಪಾಲ್ತಾಡಿ ಅವರ ಬಾಲ್ಯ  ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ಹುಟ್ಟಿದ್ದು ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೆಲತ್ತಾಜೆಯಲ್ಲಿ. ಇಲ್ಲಿ ವಾಸವಿದ್ದದ್ದು ಬೀಡಿನ …

Read more