ದತ್ತಿ ನಿಧಿ ಪುಸ್ತಕ ಪ್ರಶಸ್ತಿ ಪುರಸ್ಕಾರಕ್ಕೆ ಅರ್ಜಿಯನ್ನು ಆಹ್ವಾನ

ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಇರುವ ವಿವಿಧ ಪ್ರಕಾರಗಳ ದತ್ತಿ ನಿಧಿ ಪುಸ್ತಕ ಪ್ರಶಸ್ತಿ ಪುರಸ್ಕಾರಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಸುಮಾರು 53 ವಿವಿಧ ಪ್ರಕಾರಗಳ ಪ್ರಶಸ್ತಿಯ ವಿವರಗಳನ್ನು ಇಲ್ಲಿ ಕೊಟ್ಟಿರುವ ಪಿಡಿಎಫ್ ನಲ್ಲಿ ಉಲ್ಲೇಖಿಸಲಾಗಿದೆ. ಪಟ್ಟಿಯನ್ನು ಗಮನವಿಟ್ಟು ಓದಿ ಅರ್ಥೈಸಿಕೊಳ್ಳಿ , ಬಳಿಕ ನೀವು ರಚಿಸಿದ ಕೃತಿಯು ಈ ಪಟ್ಟಿಯಲ್ಲಿ ಯಾವ ಪ್ರಕಾರದ ಪ್ರಶಸ್ತಿಗೆ ಸೂಕ್ತವಾಗುತ್ತದೆ ಎಂದು ಸರಿಯಾಗಿ ತಿಳಿದು ಪ್ರಶಸ್ತಿ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಿ.

ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ನಿಯಮವನ್ನು ಕೊನೆಗೆ ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-05-2024

ವಂದನೆಗಳು

ಪುತ್ತೂರು ಉಮೇಶ್ ನಾಯಕ್
ಅಧ್ಯಕ್ಷರು
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು

Leave a comment